ನಾಗಮಂಗಲದಲ್ಲಿರುವ ಸೌಮ್ಯಕೇಶವ ದೇವಾಲಯವನ್ನು ( ಸೌಮಕೇಶವ ಅಥವಾ ಸೌಮ್ಯಕೇಶವ ಎಂದೂ ಕರೆಯುತ್ತಾರೆ) ಹೊಯ್ಸಳ ಸಾಮ್ರಾಜ್ಯದ ಆಡಳಿತಗಾರರಿಂದ 12 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ನಾಗಮಂಗಲವು ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ಶ್ರೀರಂಗಪಟ್ಟಣ - ಸಿರಾ ಹೆದ್ದಾರಿಯಲ್ಲಿ ಐತಿಹಾಸಿಕವಾಗಿ ಮಹತ್ವದ ಪಟ್ಟಣವಾದ ಮೈಸೂರಿನಿಂದ 62ಕಿ.ಮೀ ದೂರದಲ್ಲಿ ಇದೆ. ಐತಿಹಾಸಿಕವಾಗಿ, ಹೊಯ್ಸಳ ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ನಾಗಮಂಗಲವು ಪ್ರಾಮುಖ್ಯತೆಗೆ ಬಂದಿತು, ಅದು ವೈಷ್ಣವ ನಂಬಿಕೆಯ ಪ್ರಮುಖ ಕೇಂದ್ರವಾಯಿತು ಮತ್ತು ಅವನ ರಾಣಿಯರಲ್ಲಿ ಒಬ್ಬರಾದ ಬೊಮ್ಮಲಾದೇವಿಯಿಂದ ಪ್ರೋತ್ಸಾಹವನ್ನು ಪಡೆಯಿತು. ವೀರ ಬಲ್ಲಾಳ ರ ಆಳ್ವಿಕೆಯಲ್ಲಿ, ನಾಗಮಂಗಲವು ಅಗ್ರಹಾರವಾಗಿ (ಹಿಂದೂ ಧಾರ್ಮಿಕ ಅಧ್ಯಯನದ ಸ್ಥಳ) ಅಭಿವೃದ್ಧಿ ಹೊಂದಿತು ಮತ್ತು ಗೌರವಾನ್ವಿತ ವೀರ ಬಲ್ಲಾಳ ಚತುರ್ವೇದಿ ಭಟ್ಟಾರತ್ನಾಕರವನ್ನು ಹೊಂದಿತ್ತು. ಈ ದೇವಾಲಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿ ರಕ್ಷಿಸಲಾಗಿದೆ.